Showing posts with label ಕವನ. Show all posts
Showing posts with label ಕವನ. Show all posts

Wednesday, 29 June 2011

ಆ ಕೊನೆಯ ಇರುಳು

ನಿರ್ಜನ ಜಾಗದಲಿ, ಕರಾಳ ರಾತ್ರಿಯಲಿ
ಹೊಂಗೆಯ ಮರದಡಿ ಕೂತಳು ಕಮಲಿ..
ಸೂಜಿಯಂತೆ ಚುಚ್ಚುತ್ತಿದ್ದ ಬಿರುಸು ಗಾಳಿ,
ಚರ್ಮವ ಸುಲಿಯುವ ಹಾಗೆ ಮಾಡಿದೆ ಧಾಳಿ..

ಸಂಕಟ, ಅವಮಾನ, ವಿಕಾರ ನೆನಪುಗಳ  ಸವಾರಿ
ದುಃಖ, ಸಂಕಟ, ದುಮ್ಮಾನ ಒತ್ತರಿಸಿ ಬಂತು ಹುಹಾರಿ..
ಬತ್ತಿದೆ ಕಂಬನಿ, ಮುರಿದಿದೆ ಕನಸು,
ಮಣಿಯದು, ದಣಿಯದು, ಕಲ್ಲಾಗಿದೆ ಮನಸು..



ಯಾರಿಗಾಗೋ ಈ ಜೀವನ, ಏತಕ್ಕಾಗಿ ಬದುಕಿರುವೆ ನಾ?
ಉತ್ತರಿಸೆಲೇ ಚಂದಾಮಾಮ, ನಿರೀಕ್ಷಿಸಿದೆ ಈ ನಯನ..
ಅವ ಮೋರೆ ನೋಡಲೂ ಬರಲಿಲ್ಲ..
ಗೊತ್ತು.. ನಾ ಯಾರಿಗೂ ಬೇಕಿಲ್ಲ..

ಸಾಕಷ್ಟು ಸವೆದಿದೆ ಪಯಣ..
ತಲುಪಿದೆ ಕೊನೆಯ ನಿಲ್ದಾಣ: ಮಸಣ!


Tuesday, 14 June 2011

ಸೂರ್ಯೋದಯ


 ದೂರದ ದಿಗಂತದಲಿ ನೇಸರನು ಹುಟ್ಟಿ,

ಬೆಳಗ್ಯಾನು ಮನಸನು ಹೃದಯಾಂತರಾಳವನು ಮುಟ್ಟಿ..

ಬಳೆದನು ಹೊಂಬಣ್ಣವನು ಅಂಬರಕೆ ಉದಯಿಸೋ ಮುನ್ನ..

ತಂದಾನು ಹೂನಗೆಯನು; ಅಳಿಸಿ ಅಳುವನ್ನ..