Friday 29 July, 2011

ಸಾಗುತ ದೂರ ದೂರ

 ಅವಳು ದೂರದ ಊರಿಗೆ ಕೆಲಸಕ್ಕಾಗಿ ಹೊರಟು ನಿಂತಿದ್ದಳು. ಅವಳ ತಂದೆ ಅವಳನ್ನು ಬಿಟ್ಟು ಬರಲು ಜೊತೆ ಇದ್ದರು. ರೈಲು ನಿಲ್ದಾಣದಲ್ಲಿ, ಅವನಿಗೆ ಕರೆ ಮಾಡಿದಳು. ಅವನಿಲ್ಲಿ ಅವಳು ಹೊರಡುತ್ತಾಳೆ ಎನ್ನುವ ಯಾವ ಅಂಜಿಕೆ, ಯೋಚನೆ, ಪೇಚಾಟ ಏನೂ ಕಾಣಲಿಲ್ಲ. 'ಹೊರಡುತ್ತಿದ್ದೀನಿ ನಾನು. ಕೊನೆಯದಾಗಿ ಇಷ್ಟು ಹೊತ್ತು ಮಾತನಾಡಲು ಆಗೋದು. ಇನ್ನು ಮುಂದೆ ಅಷ್ಟೊಂದೆಲ್ಲ ಖರ್ಚು ಮಾಡಿಕೊಂಡು ಕರೆ ಮಾಡೋಕ್ಕಾಗೋಲ್ಲ." ಎಂದಳು. ಅವಳ ಕಣ್ಣು ತುಂಬಿ ಬಂದಿತ್ತು. ಹೃದಯ ೧೦ ಕಿಲೋ ಅಕ್ಕಿ ಇರೋ ಮೂಟೆ ಆಗಿತ್ತು. 
'ಗೊತ್ತಿರೋ ವಿಷ್ಯ ಅಲ್ವಾ? ಜೀವನ ಬಂದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು' ಎಂದು ನಿರ್ಭಾವವಾಗಿ ಹೇಳಿದನು. 

ಅವಳಿಗೆ ಅವಳ ಮನಸಿನ ಹಂಬಲ ಗೋಚರಿಸೋ ತೊಡಗಿತ್ತು.. . ಅವನಿಂದ ದೂರ ಹೋಗುತಿದ್ದೀನಿ ಎಂದು ಯೋಚಿಸಿದಾಗೆಲ್ಲ ಹೃದಯ 'ನಾ ನಿನ್ನ ಜೊತೆ ಬರಲಾರೆ' ಎಂದು ಕೀರಲು ಧ್ವನಿಯಲ್ಲಿ ಅಳುತ್ತಿತ್ತು. ಅವಳ ಹೃದಯಕ್ಕೆ ಅವನ ಒಡನಾಟ ಬೇಕಿತ್ತು. ಆದರೆ ಅವನಿಗೆ ಏನೂ ಅನ್ನಿಸೋದೇ ಇಲ್ವಲ್ಲ. ಅವಳ mobile ತೆಗೆದು ಬರೆದಳು

ಬಾಗಿಲು ತೆರೆದಿದೆ, ಕಂಗಳು ಕಾದಿವೆ
ಬರಬೇಕಾದವರು ಬರುವರೇನೋ?
ಮನದ ಕಾವು ತಣಿವುದೇನೋ?
ಅವನ ನೆನಪಲ್ಲೇ ಸವೆದಿದೆ ಜೀವ
ಆ ಸವಿಯಲ್ಲಿ ಮರೆತಿದೆ ನೋವ..
ಒಲವಿನ ಧಾರೆಯು ಬಸಿದು ಹರಿಯುತಿದೆ
ಗುಪ್ತಗಾಮಿನಿಯಾಗಿ ನೆನೆಸಿ, ಮರೆಯಾಗಿದೆ.
ಇದು ಆ ಹೃದಯಕ್ಕೆ ತಿಳಿಯದೆ ಹೋದರೆ?
ಮುನದಲೇ ಚೀರುತಿದೆ ಹೃದಯಾಂತರಾಳದ ಕರೆ

ಬರೆದು ಮುಗಿಸಿದ್ದಳಷ್ಟೇ.. ಅವನ ಕರೆ ಬಂತು.

'ಯಾವ platform ನಲ್ಲಿ ಇದ್ದೀಯ?'
'ಯಾಕೆ? ಇಲ್ಲಿಗೆ ಬಂದಿರೋ ಹಾಗಿದೆ!! ಹೌದಾ?'
'ಕೇಳಿದಕ್ಕೆ ಉತ್ತರಿಸು'
'೫'
'ಸೀದಾ ಬಾ.. Gate ಹತ್ತಿರ'

ಅವಳ ಕಿವಿಯನ್ನ ಅವಳೇ ನಂಬಲಾಗಲಿಲ್ಲ.. ಅವನು ಬಂದಿದ್ದ!! ಅವಳನ್ನ ಬೀಳ್ಕೊಡಲು. ಅವಳ ಅಪ್ಪನಿಗೆ ಇಲ್ಲೇ ನನ್ನ ಗೆಳೆಯರು ಬಂದಿದ್ದಾರೆ, ಹೋಗಿ ಬರುತ್ತೇನೆಂದು ಹೇಳಿ ಓಡಿದಳು.. ಯಾವುದೊ ದೊಡ್ಡ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಅವಳ ಹೆಸರು ಕರೆದಾಗ ಆಗೋ ಅನುಭವ ಅವಳಿಗೆ.. ಅವಳ ಪಾಲಿಗೆ ಅವನೇ 'ಜೀವನ' 

ಅವನು ಅವಳನ್ನು ಕಂಡೊಡನೆ ನಕ್ಕ.. ಇವಳಿಗೆ ಹಿಗ್ಗೋ ಹಿಗ್ಗು.. 'ಹುಷಾರಾಗಿ ಹೋಗಿ ಬಾ' ಎಂದ.. ಸರಿ ಎಂದು ತಲೆ ಅಲ್ಲಾಡಿಸಿದಳು.. ಮಾತೇ ಹೊರಡಲಿಲ್ಲ.. !  

Wednesday 20 July, 2011

ಪುರಾಣ



ಸೀತೆಯನು ಮೆಚ್ಚಿಸಲು ಬಂದ ರಾವಣ,
ತೋರಿಸಿದ ಅವನ ಎಲ್ಲ ಪರಾಕ್ರಮ..
ಜಾನಕಿಯ ಮನದ ತುಂಬಾ ಅವಳ ರಮಣ
ರಾವಣ ಎಂದಿಗೂ ಪರ, ಅಕ್ರಮ

Monday 18 July, 2011

ವಿರಹದ ಬೇಗೆ

 ವಾರ  ದಿನ ಕಳೆದಿತ್ತು.. ಅವಳು ಅವನಿಗೆ sms ರವಾನಿಸೇ ಇರಲಿಲ್ಲ.. ಯಾಕೆ ಹೀಗೆ ಮಾಡಿದೆ ಅವಳು?  

ಏನಾಗಿತ್ತು  ವಾರ  ದಿನದ ಹಿಂದೆ?
ಯಾರೋ ಪುಟಗೋಸಿ "good-friend" ಅಂತ ಹೇಳಿಕೊಳ್ಳುವವನು ಅವಳ ಬಾಳ ಹಾದಿಯಲ್ಲಿ ವಕ್ಕರಿಸಿದ್ದ.. ಆ ಆಸಾಮಿಯೋ ಸಿಕ್ಕಾಪಟ್ಟೆ possessive ಆಗಿದ್ದ ಅವಳ ಬಗ್ಗೆ .. ಅವಳ ಗೆಳೆತನ ಅರಸಿ ಬಂದವರಿಗೆ ಸದಾ ತೆರೆದಿದ್ದ ಅವಳ ಹೃದಯ,  ಹೊಸ ಗೆಳೆತನ ಬೇಡ ಎನಿಸಲಿಲ್ಲ.. ಆದರೆಈ ಗೆಳೆತನ ಅವಳಿಗೆ 'ಎಳೆತಅನ್ನಿಸೋಕ್ಕೆ ಶುರು ಆಗಿತ್ತು..  ಸ್ವಚ್ಚಂದ ಹಕ್ಕಿಯಾಗಿ ಹಾರುತ್ತಿದ್ದ ಮನಸ್ಸನ್ನು ಯಾರೋ ಬಲವಂತವಾಗಿ ಹಿಡಿದು ತನ್ನ ಜೊತೆಯಲ್ಲೇ ಇರಬೇಕು ಎನ್ನುವ ಸ್ವಾರ್ಥದಲ್ಲಿ ಪಂಜರದೊಳಗೆ ಹಾಕಿದ ಹಾಗೆ ಇತ್ತು..   ಪುಟಗೋಸಿ good -friend  "ಬೇರೆ ಯಾವ ಹುಡಗನ ಜೊತೆ ಮಾತಾಡಿದರೆ ನನ್ನ ತಾಯಿ ಮೇಲೆ ಆಣೆ" ಅಂದಿದ್ದ.. ಅವಳಿಗೆ ಅವನದೇ ಧ್ಯಾನ, ಸಂಧಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದಳು..  "ಛೆ..  ಮುನುಷ್ಯ ತಾಯಿಯ ಮೇಲೆ ಯಾಕೆ ಆಣೆ ಹಾಕಿದತನ್ನ  ಮೇಲೆ ಹಾಕಿಕೊಂಡಿದ್ದರೆಸಾಯೋ ಮಗನೆ.. ಯಾವ ಆಣೆನೋ ನಾ ಕಾಣೆ ಅನ್ನಬಹುದಿತ್ತು.. " ಎಂದು ಕೈ-ಕೈ ಹಿಸುಕಿಕೊಂಡಳು..  ಅವಳಿಗೆ ಯಾರನ್ನು hurt ಮಾಡೋದು ಇಷ್ಟ ಇರಲಿಲ್ಲ.. ಹಾಗಂತ ಅವಳಿಗೆ ಜೀವದ ಗೆಳೆಯನ ವಿರಹವೂ ತಡ್ಕೋಳೋದು ಕಷ್ಟವಾಗಿತ್ತು..  "ಅವನಿಗೆ ನಾನು hurt ಮಾಡಿರಬಹುದಲ್ವಾ?" ಎಂದು ಪೇಚಾಡುತ್ತಿದ್ದಳು..

ಈಗ
ಅವಳ ಅಮ್ಮ ಹಾಲು ತಂದು ಕೊಟ್ಟರು.. "ಸ್ವಲ್ಪ ಹೊತ್ತು ವಿರಾಮ ತೊಗೋಳೇ, ಆಮೇಲೆ ಮತ್ತೆ ಓದಲು ಕೂರು" ಎಂದು ಹೇಳಿ ಕೆಳಗೆ ಹೋದರು.. ಅವಳು ಬಾಲ್ಕನಿಯಲ್ಲಿ ನಿಂತು ಬಾನ ಕಡೆ ನೋಡಿದಳು.. ಅದರ ಮುಖವು ಕೋಪದಿಂದ ಕೆನ್ನೆ ಊದಿ, ಕಪ್ಪಿಟ್ಟಿದ್ದವು.. ಅವಳಿಗೆ ಅಪರಾಧಿ ಪ್ರಜ್ಞೆ ಕಾಡ ತೊಡಗಿತು.. "ಅವನು ಏನು ಮಾಡಿದ ಎಂದು ಅವನನ್ನು ದೂರ ಮಾಡಿದೆಅವನಾದರೋ ಏನು ಕೇಳಲಿಲ್ಲ.. ಏನೂ ಹೇಳಲಿಲ್ಲ.. ಸುಮ್ಮನೆ ದೂರ ಸರಿದ.. ಅವನ ಬದುಕಿನಲ್ಲಿ ನನ್ನ ಮೌಲ್ಯ ಇಲ್ಲವಾನನಗೂ ಈಗ ಮುಖವೇ ಇಲ್ಲ ಅವನಿಗೆ ಸಂದೇಶ ಕಳಿಸಲು.. ಅವನು ನನಗೆ ಅವಮಾನ ಮಾಡಿದರೆ? ನೀನು ಯಾರು ಎಂದು ಕೇಳಿದರೆ? " ಕಣ್ಣಲ್ಲಿ ನೀರು ತುಂಬಿತ್ತು.. ಮಣ್ಣಲ್ಲಿ ಮಳೆ ನೀರು ಇಂಗಿತ್ತು.. ಇವಳ ಬಟ್ಟೆಯ ಜೊತೆ ಮನಸು ಭಾರವಾಗಿತ್ತು..

ಬಟ್ಟೆ ಬದಲಿಸಿ, ಮನ ಗಟ್ಟಿ ಮಾಡಿ ಪುಸ್ತಕದ ಮುಂದೆ ಕೂತಳು.. ಸುಮಾರು ಪುಟ ಮುಗಿಸಿದ್ದಳು.. ಎಂದೂ ಓದಿನ ಮಧ್ಯೆ mobile ಮುಟ್ಟದ ಅವಳಿಗೆ, ಒಮ್ಮೆ ನೋಡಿಬಿಡೋ ಚಪಲವಾಯಿತು.. 1 messages received ಎಂದು ಬಂದಿತ್ತು.. "Show " ಒತ್ತಿದೊಡನೆ,
  ಅವಳ ಗುಂಡಿಗೆಯ ಗುಂಡಿ ಎಲ್ಲ ಕಿತ್ತು ಬರುವ ಹಾಗೆ ಬಡ್ಕೋತಿತ್ತು..  ಅವನ ಸಂದೇಶ! ಅದನ್ನು ತೆಗೆಯಲು ಭಯ.. ಕೈ ನಡುಗುತಿತ್ತುಹಣೆಯ ಮುತ್ತುಗಳು ಮೂಡಿದ್ದವು.. ಧೈರ್ಯ ಮಾಡಿ open ಮಾಡೇ ಬಿಟ್ಟಳು..
ಮತ್ತೆ ಮತ್ತೆ ಓದಿದಳು.. 
Saalon baad  naa jaane kya sama hoga......
Hum mein se na jaane kaun kaha hoga......
Phir aise milenge khwabon mein.....
Jaise sukhe gulab milte hai kitaboon mein..

"ಏನ್ ಏನೋ ಅರ್ಥವಾಗುತ್ತಿದೆ.. ಅಥವಾ ಏನ್ಏನೋ ಕಾಣುತ್ತಿದೆಯಅವನೆನಾ ಕಳಿಸಿರೋದು? Back ಒತ್ತಿ ನೋಡಿದಳು.. ಹೌದು.. ಅವನೇ!  ಏನಿದರ ಅರ್ಥ? ಏನೆ ಆಗಲಿ! ನಾನು Reply ಮಾಡೇ ಮಾಡ್ತೀನಿ.. ಆದರೆ..  ಪುಟಗೋಸಿ friend ತಾಯಿಯ ಮೇಲೆ ಆಣೆ?  ಏನು ಮಾಡಲಿ? ತಡವಾಗಿ ಉತ್ತರಿಸಿದರೆ ನಾನು ಅವನನ್ನು ನಿರ್ಲಕ್ಷ್ಯ ಮಾಡುತಿದ್ದೀನಿ ಅಂದು ಕೊಂಡರೆ? ಉತ್ತರ ಆಮೇಲೆ ಹುಡುಕೋಣ" ಇಷ್ಟೆಲ್ಲಾ ಕ್ಷಣಾರ್ಧದಲ್ಲಿ ಯೋಚಿಸಿದ್ದಳು.. Reply ಒತ್ತೆ ಬಿಟ್ಟಳು..
ಏನು ನಮ್ಮನ್ನು ನೆನಪಿಸಿಕೊಂಡುಬಿಟ್ಟಿದ್ದೀರ? ಹೇಗೆ ಇದೆ ಜೀವನ?

Send ಗುಂಡಿ 'ಟಕ್' ಎಂದು ಒತ್ತಿದಾಗ ಸಂದೇಶದ ಜೊತೆ ಮನದ ಭಾರವೂ ಹಾರಿ ಹೋಯಿತು.. ಮುಖದಲ್ಲಿ ನಗು ಮೂಡಿತ್ತು.. "ಬೈಯ್ಯುತ್ತಾನಾ? ಬೈಯ್ಯಲಿ.. ನಾನು ಮಾಡಿರೋ ಕೆಲಸವೂ ಅಂತದ್ದೇ.. ಸದ್ಯ ಪುಣ್ಯಾತ್ಮ Sms ಅನ್ನೋ ಕೊಂಡಿಯನ್ನು ನನ್ನ ಗುಂಡಿಗೆಗೆ ಹಾಕಿದನಲ್ಲ.. ಇನ್ನ ನಾನು ಹೇಗಾದರೂ ಈ ಪುಟಗೋಸಿ friend ಇಂದ ಪಾರಾಗಬಹುದು.." ಎಂದು ಯೋಚಿಸುವುದರಲ್ಲಿ ಮತ್ತೆ sms ಬಂದಿತ್ತು..

ಮರೆತವನು ನಾನಲ್ಲ 

ನೇರ, ದಿಟ್ಟ ಉತ್ತರ ಬಂತು.. "ಇದಕ್ಕೇನೆ ಇಷ್ಟ ಆಗೋದು ನೀನು" ಯೋಚಿಸುವುದರಲ್ಲಿ ನಗೆ,ಹನಿ ಎರಡೂ ಮೂಡಿತ್ತು.. Topic ಬದಲಾಯಿಸಿದಳು..  ಸ್ವಲ್ಪ ಹೊತ್ತು ಕರ್ಣ-ಅರ್ಜುನರ ಬಾಣಗಳ ತರಹ ಪುಂಖಾನುಪುಂಖವಾಗಿ sms ಓಡಾಡಿತು.. 

ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವಾರ್ಷ ಆಯಸ್ಸಂತೆ (ನಮ್ಮ ಸಂಬಂಧಕ್ಕೆ!) ಅಂದುಕೊಂಡಳು.. !

ಆ ಆಣೆಯ ಕಥೆ ಏನಾಯಿತು
ಆ ಪುಟಗೋಸಿ good -friend  ಏನು ಹೇಳಿದಿದ್ದು? "Do not  talk to  any other guy" ಅಂತ ತಾನೇ
ಅವಳು ಮನದಲ್ಲಿ "Get a life bugger! I am talking to my MAN"  ಎಂದು ಗೆಲುವಿನ ನಗೆ ನಕ್ಕಳು.. 

Sunday 10 July, 2011

ರವ ರವ ರವಿವಾರ!


ಭಾನುವಾರವೂ ಮನೆಯ ಸೂರಿಲ್ಲ ಎನಗೆ,
ಇದೆಯಂತೆ ಒಂದು ಸಮಾರಂಭ..
ಹೋಗಬೇಕು ಭಾಮೆಯ ಮಾಮನ ಮನೆಗೆ,
ಇಲ್ಲದಿದ್ದರೆ ಮನೆಯಲ್ಲಿ ಸಮರ ಆರಂಭ..

Friday 8 July, 2011

ಖುಷಿಯ ಕಾರಣ




ಮದುವೆಯಾದ ಮೊದಲನೇ ವರ್ಷ..
ಖುಷಿ ಇದ್ದರೆಕಾರಣ "ಹೆಂಡತಿ"
ಮದುವೆಯಾದ ಹತ್ತನೇ ವರ್ಷ..
ಖುಷಿ ಇದ್ದರೆಕಾರಣ "ಹೆಂಡ ಅತಿ"


Wednesday 6 July, 2011

ನಾಯಿ ಕೊಡೆ


ಇದು ಕೊಡಗಿನಲ್ಲಿ ನಾನು ತೆಗೆದ ಚಿತ್ರಗಳು.. ನಾಯಿ ಕೊಡೆ/Mushroom /ಅಣಬೆ ಏನಾದರು ಕರೆಯಿರಿ..  ಹೇಗಿದೆ?

ನಾಯಿ ಕೊಡೆ.. ಇದನ್ನು ನೋಡಿದಾಗ ನನಗೆ ನನ್ನ ಬಾಲ್ಯದಲ್ಲಿ ಅಮ್ಮನ್ನಿಂದ ಸಿಕ್ಕ ಬಿಸಿ ಬಿಸಿ ಕಜ್ಜಾಯವೇ ನೆನಪಾಗುತ್ತದೆ.. 
ಯಾಕೆ ಬಿದ್ದಿತ್ತು ಏಟು? ನಾನೇನು ಮಾಡಿದ್ದೆ ? ಮುಂದೆ ಓದಿ ನನ್ನ ಕರ್ಮ-ಕಾಂಡವನ್ನ..

ನಾನು ೪ನೇ ತರಗತಿಯಲ್ಲಿ ಓದುತಿದ್ದೆ.. ನನ್ನ ಸೋದರತ್ತೆಯ ಮದುವೆ ಸಂಭ್ರಮ ಮನೆಯಲ್ಲಿ.. ಎಲ್ಲಾ ಸಂಭಂದಿಕರು  ಸೇರಿದ್ದರು , ನಾವು ಮಕ್ಕಳೆಲ್ಲ ಗುಂಪು ಮಾಡಿಕೊಂಡು ಆಟ ಆಡುತ್ತ ಇದ್ವಿ.. ನಾನು ನನ್ನ ತಮ್ಮ ಇಬ್ಬರೇ (ಮಕ್ಕಳ ಪೈಕಿ) ಆಗ ಬೆಂಗಳೂರಲ್ಲಿ ಇದ್ದಿದ್ದು.. ಹೊಸ ಚಿತ್ರಗಳು ಬಂದಿದ್ದು ಹೋದದ್ದು, ಚಿತ್ರ ಗೀತೆಗಳು, ಇವೆಲ್ಲ ವಿಷಯದ ಬಗ್ಗೆ ಹೆಚ್ಚು ತಿಳಿದಿದ್ದು ನನಗೇನೆ.. ನನ್ನ ತಮ್ಮ ಯಾವುದರಲ್ಲೂ ಹೆಚ್ಚು ಮಾತಾಡುತ್ತಿರಲಿಲ್ಲ.. ನಾನೋ ಮಾತಿನ ಮಲ್ಲಿ, dominating ಸ್ವಭಾವ ಬೇರೆ.. (ಗಂಡ ಪಾಪದ ಪ್ರಾಣಿ ಅಂದ್ರಾ?) 

ಛತ್ರಕ್ಕೆ ಹೋದೆವು.. ಊಟ ಮುಗಿಸಿ, ಅಲ್ಲೇ ಸುತ್ತ ಮುತ್ತ beat ಹೊಡೀತಿದ್ವಿ.. ನನ್ನ ಕಣ್ಣಿಗೆ ಪುಟ್ಟ ಪುಟ್ಟ ನಾಯಿ ಕೊಡೆಗಳು ಬಿದ್ದವು.. ಅದನ್ನು ಕಿತ್ತುಕೊಂಡು, ಅದರ ಬಗ್ಗೆ ದೊಡ್ಡ lecture ಬಿಟ್ಟೆ.. ಏನೆಂದು ಹೇಳಿ ನಿಮಗೆ bore ಹೊಡಿಸೋಲ್ಲ ಬಿಡಿ..  Final Punch strong ಇರಬೇಕಲ್ವಾ? ಅದಕ್ಕೆ ನನ್ನ lecture ಅನ್ನು ಒಂದು ಹಾಡಿನಿಂದ ಮುಗಿಸಿದೆ.. ಕನ್ನಡ ಚಿತ್ರರಂಗದಲ್ಲಿ ಈ ಮನೋಹರ ಅಣಬೆ ಮೇಲೆ ಒಂದು ಗೀತೆಯೂ ಇದೆ ಎಂದು ಹಾಡಲು ಶುರು ಮಾಡಿದೆ..

ಪಪ್ಪಿ ಕೊಡೆ ಒಂದು ಪಪ್ಪಿ ಕೊಡೆ..
ಈ lip ಇಗೆ ನೀ ಬಿಗಿದು ಅಪ್ಪಿ ಕೊಡೆ.. 

ಯಾಕೆ ಈ ಹಾಡು ಹಾಡಿದೆ ಎಂದು ಯೋಚಿಸುತ್ತಿದ್ದೀರಾ? ನಾಯಿ ಮರಿಗೆ ಆಂಗ್ಲದಲ್ಲಿ puppy ಅನ್ನೋಲ್ವಾ? ಪುಟ್ಟ ಪುಟ್ಟ ನಾಯಿ ಕೊಡೆಗೆ ಪಪ್ಪಿ-ಕೊಡೆ ಅಂತಾರೆ ಅನ್ಕೊಂಡೆ.. ತಪ್ಪಾ? ಅಲ್ಲಿ ಇದ್ದೋರೆಲ್ಲ ಕೋಲೆ ಬಸವನ ತರಹ ತಲೆ ಅಲ್ಲಾಡಿಸಿದರು.. ಇಲ್ಲವೇ ಇವಳ ಬಾಯಿಗೆ ಯಾರು ಸಿಕ್ಕಿ ಹಾಕಿಕೊತಾರಪ್ಪ ಅಂತ ತೆಪ್ಪಗೆ ಇದ್ದರು.. 

ನನಗೋ ನನ್ನ wit ಬಗ್ಗೆ ಹೆಮ್ಮೆಯ ಹಮ್ಮು.. ಬೀಗುತ್ತಿದ್ದೆ.. ಮಕ್ಕಳ ಬುದ್ಧಿವಂತಿಕೆಯನ್ನು ತಮ್ಮ ಖುಷಿಯಾಗಿಸಿಕೊಳ್ಳೋ ನನ್ನ ತಾಯಿಯ ಬಳಿ ಹೋದೆ.. ಅವರು ಬೀಗರ ಮನೆಯನ್ನು ಶೃಂಗಾರ ಮಾಡುವುದರಲ್ಲಿ ತೊಡಗಿದ್ದರು.. ನೆಂಟರೆಲ್ಲ ಅಲ್ಲೇ ನೆರೆದಿದ್ದರು.. ನನಗೆ ಇನ್ನಾ ಒಳ್ಳೆ stage ಬೇಕಾ ಬುದ್ಧಿವಂತಿಕೆ ಪ್ರದರ್ಶನಕ್ಕೆ? 
ಅಲ್ಲೇ ಇದ್ದ ಕುರ್ಚಿಯನ್ನೇ ನನ್ನ stage ಮಾಡಿಕೊಂಡೆ.. ಕೈಯಲ್ಲಿ ಇದ್ದ ನಾಯಿ-ಕೊಡೆಯನ್ನು ಫಿಲ್ಮಿ ರೀತಿಯಲ್ಲಿ ಅಲ್ಲಾಡಿಸುತ್ತ ಹಾಡು ಶುರು ಮಾಡಿದೆ.. ನನಗೆ ಹಾಡಿನ ಮೊದಲನೇ ಸಾಲು ಎಷ್ಟು kick ಕೊಟ್ಟಿತ್ತು ಅಂದ್ರೆ.. ಎರಡನೇ ಸಾಲು ಏನು ಇರಬಹುದು ಎಂದು care ಮಾಡಲಿಲ್ಲ..

ಹಾಡು ಕೇಳುತ್ತಿದ್ದಂತೆ ಅಮ್ಮನ ಮುಖ ಕೆಂಪಿಟ್ಟಿತು ನಾಚಿಕೆ/ಅವಮಾನ/ಕೋಪದಿಂದ.. "ಬೇಡ ಕಣೆ.. ನಿಲ್ಲಿಸು..ಇಲ್ಲಾಂದ್ರೆ ನಿನ್ನ ಗ್ರಹಚಾರ ಬಿಡಿಸುತ್ತೀನಿ!" ಎಂದು ಬೆದರಿಸಿದರು.. "ಛೆ.. ಅಮ್ಮ.. ನಿನಗೆ ಅರ್ಥನೇ ಆಗಲಿಲ್ಲ.. ನಾನು ಹೇಳುತ್ತಿರುವುದು.." ಎಂದು ಮತ್ತೆ ಹಾಡಿ ಅರ್ಥೈಸಲು ಬಾಯಿ ಬಿಟ್ಟಿದ್ದೆ.. ಆಮೇಲೆ ಕಣ್ಣಲ್ಲಿ ನೀರು ಬಂದಿದ್ದೊಂದೇ ನೆನಪು..

ಬಹಳ ದಿನ ನನ್ನ ತಾಯಿಗೆ ನನ್ನ ಮಗಳಿನ ಬುದ್ಧಿವಂತಿಕೆ ಅರ್ಥ ಮಾಡಿಕೊಳ್ಳುವ capacity ನೇ ಇಲ್ಲ ಎಂದು ತಿಳಿದಿದ್ದೆ.. ಆಮೇಲೆ ಮಾಸಿ ಹೋಗಿತ್ತು ಈ ಘಟನೆಯ ನೆನಪು.. 

ಈ ನಡವೆ ಯಾವಾಗೋ ಟಿವಿ ನೋಡಬೇಕಾದರೆ "ಕುಂತಿ ಪುತ್ರ" ಎಂಬ ಚಿತ್ರದಲ್ಲಿ ಈ ಹಾಡು ಬಂತು.. ಆಗ ನನ್ನ ಅಮ್ಮ ಯಾಕೆ ನನ್ನ lip ಗೆ ಬಿಗಿದಿದ್ದರು ಎಂದು ಸ್ಪಷ್ಟವಾಯಿತು..