Saturday 19 November, 2011

ಜಿ.ಪಿ. ರಾಜರತ್ನಂ

ಬಾಲ್ಯದ ನೆನಪಲ್ಲಿ "ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?" ಹಾಡು ಅಚ್ಚು ಉಳಿದಿರಬೇಕು ಅಲ್ಲವೇ? ಆ ಕಂದ-ಪದ್ಯವನ್ನು ಬರೆದವರು ಯಾರು? 
ಜಿ.ಪಿ. ರಾಜರತ್ನಂ. 
ಆ ವ್ಯಕ್ತಿ ಹೇಗೆ ಮಕ್ಕಳ ಪದ್ಯವನ್ನು ಬರೆಯಲು ನಾಂದಿ ಹಾಡಿದರು ಎಂಬುವುದರ ಬಗ್ಗೆ, ಕಹಳೆಯಲ್ಲಿ ಬರೆದಿದ್ದೇನೆ. ಓದಿ ತಿಳಿಸಿ.. ಹೇಗಿದೆ ಎಂದು.. 


http://www.kahale.gen.in/2011/11/blog-post_18.html

Monday 10 October, 2011

ಮತ್ತೂರುಜಿ

ಅಕ್ಟೋಬರ್ ,೨೦೧೧ ಜಗತ್ತೆಲ್ಲ ಸ್ಟೀವ್ ಜಾಬ್ಸ್ ತೀರಿಹೋದ ದುಖದಲ್ಲಿ ಮುಳುಗಿದ್ದರೆನನಗೆ ಬೇಸರ ತಂದ ಇನ್ನೊಂದು ಸಾವು ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಗಳದ್ದು. ಹಿರಿ ಜೀವಕೊನೆಯ ದಿನದವರೆಗೆ ಅಕ್ಷರಶಃ "ಬದುಕಿದ" ವ್ಯಕ್ತಿ.
ನನ್ನ ನೆಚ್ಚಿನ ಪ್ರವಚನಕಾರ.

ಶಿವಮೊಗ್ಗ ಜಿಲ್ಲೆಯ , ಮತ್ತೂರು ಎಂಬ ಸಣ್ಣ ಹಳ್ಳಿಯಲ್ಲಿ ರಾಮಕೃಷ್ಣಯ್ಯ ಮತ್ತು ನಂಜಮ್ಮ ಎಂಬ ದಂಪತಿಗಳ ಎಂಟನೆ ಮಗುವಾಗಿ ಜನಿಸಿದರು. ಬಡ ಬ್ರಾಹ್ಮಣ ಕುಟುಂಬ. ತಿನ್ನಲು ಹಿಡಿ ಅನ್ನಕ್ಕೂ ಒದ್ದಾಡಿದ ದಿನಗಳೂ ಕಳೆದರು. ವಾರಾನ್ನ ತಿಂದು ವಿದ್ಯಾರ್ಥಿ ಜೀವನ ಕಳೆದರು. ಮುಂದೆ ಮದರಾಸಿಗೆ ಹೋಗಿ ಉನ್ನತ ವ್ಯಾಸಂಗ ಮುಗಿಸಿದರು. ಮನೆಯ ಕಷ್ಟಗಳಿಗೆ ತಲೆ ಬಾಗಿ   ಮತ್ತೆ ಶಿವಮೊಗ್ಗಗೆ ಮರಳಿದರು. ಯಾವುದೋ  ಗಿರಣಿಯಲ್ಲಿ ಸಮಯ-ಕಾಯೋ ಕೆಲಸ ಮಾಡಿದರು, ಮತ್ತೆ ಬಸ್ inspector ಆಗಿ ಕೆಲಸ ಮಾಡಿದರು, ಅದಾದ ಮೇಲೆ ಅವರು ಭಾರತೀಯ ವಿದ್ಯಾ ಸಂಸ್ಥೆ ಸೇರಿ ಲಂಡನ್ನಲ್ಲಿ ಸೇವೆ ಸಲ್ಲಿಸಲು ತೆರಳಿದರು. ಈಗ, ಭಾರತೀಯ ವಿದ್ಯಾ ಸಂಸ್ಥೆ ಎಂದರೆ ಮತ್ತೂರು ಕೃಷ್ಣಮೂರ್ತಿಗಳು ಎನ್ನುವ ಮಟ್ಟಿಗೆ ಬೆಳೆಸಿದ್ದಾರೆ.

ಅವರ ಭಾರತೀಯತೆ ಬಗೆಗಿನ ಹೆಮ್ಮೆ, ಸಂಸ್ಕೃತಿಯ ಬಗ್ಗೆ ಅಭಿಮಾನ, ಪ್ರವಚನಗಳು, ಕುಮಾರವ್ಯಾಸ ಭಾರತದ ವಾಚನ, ನವರಸಗಳ ಉಪಯೋಗ, ಬರೆದ ೪೦ಕ್ಕು ಹೆಚ್ಚು ಹೊತ್ತಿಗೆಗಳು ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ! ಅವರ ಬಗ್ಗೆ ತಿಳಿಯದಿದ್ದವರು ಅವರ ಬಗ್ಗೆ ಓದಿ. ಅವರ ಪುಸ್ತಕಗಳನ್ನು ಓದಿ, ಅವರ ಪ್ರವಚನ ಕೇಳಿ. 

ನನಗೆ ಇಷ್ಟವಾದ ಕೆಲವು ಅವರ ನಿಲುವುಗಳು ಪಟ್ಟಿ ಮಾಡಿದ್ದೀನಿ.  
·  ನಮಗೆ ಬೇರೆ ಸಂಸ್ಕೃತಿಯ ಮುಂದೆ ನಮ್ಮದು ಅಲ್ಪ ಎನಿಸುವುದುದಕ್ಕೆ ಕಾರಣ ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಮ್ಮ ಸೋಲು

·  ಬೇರೆಯ ಸಂಸ್ಕೃತಿಯಿಂದ ದೂರವಿರೋದು ಸರಿಯಿಲ್ಲ, ಆದರೆ ನಮ್ಮ ಸಂಸ್ಕೃತಿಯ ಬಲಗಳನ್ನೂ ತಿಳಿದಿರಿ

·  ವಿಶಾಲ ಹೃದಯ ಮತ್ತೆ ಉನ್ನತ ಯೋಚನೆ ಇಡಿ ಜಗತ್ತನ್ನ ಒಂದೇ ಸಂಸಾರ ಮಾಡುತ್ತದೆ.

·  ಬಡತನವೇ ನನ್ನ ಯಶಸ್ಸಿನ ಹಾದಿಯಾಯಿತು

·  ಬಡತನವು ನನಗೆ ವರವಾಗಿ ಬಂತು, ಕಷ್ಟದ ಹಾದಿಗೆ ಸೋಪಾನವಾಯಿತು, ಕ್ಲಿಷ್ಟತೆಯನ್ನು ಧೈರ್ಯದಿಂದ ಎದುರಿಸಿ ಗೆಲ್ಲುವ ಹುಮ್ಮಸ್ಸು ಕೊಟ್ಟಿತು.

·  ಜನ ನಿಮ್ಮನ್ನು ಗೌರವಿಸುವುದು ನೀವು ನಿಮ್ಮ ಭಾರತೀಯತೆ ಉಳಿಸಿಕೊಂಡರೆ, ಬೇರೆಯನ್ನು ಅನುಕರಣೆ ಮಾಡಿದರೆ ಅಲ್ಲ.

·  ಮಕ್ಕಳಲ್ಲಿ ಮೌಲ್ಯ ಬೆಳಸುವುದು ತಂದೆ-ತಾಯಿಯರ ಕರ್ತವ್ಯ. ಸ್ವಲ್ಪ ತ್ಯಾಗವೂ ಅತ್ಯವಶ್ಯಕ.

·  ಜೀವನದ ಜಂಜಾಟದಲಿ, ಮಕ್ಕಳಲ್ಲಿ ಮೌಲ್ಯ ತುಂಬಲು ಮರೆತರೆಅವರ ಜೀವನ ನಾಶ ಮಾಡುವುದಲ್ಲದೆ, ನಿಮ್ಮ ಮಕ್ಕಳನ್ನೂ ಜೀವನದಲ್ಲಿ ಸೋಲಿಸಿ ಬಿಟ್ಟೀರಿ ಜೋಕೆ!   


·   ಬ್ರಿಟಿನ್ ರಾಣಿಯ ಜೊತೆ ಕೈ ಕುಲುಕಿದ್ದರೆನಮ್ಮ ಸಂಸ್ಕೃತಿಯ ಬಗ್ಗೆ ಅವರಿಗೆ ತಿಳಿಸುವ ಸಂದರ್ಭವೇ ಬರುತ್ತಿರಲಿಲ್ಲ." (ಕೈ ಕುಲುಕಲು ರಾಣಿಯು ತನ್ನ gloves ತೆಗಿಯುತ್ತಿರುವಾಗ ಇವರು ಎರಡೂ ಕೈ ಜೋಡಿಸಿ ಮುಗುಳ್ನಗುತ್ತ ನಿಂತಿದ್ದರು. ಚಕಿತಳಾದ ರಾಣಿನಮಸ್ತೆ"ಯ ಬಗ್ಗೆ ಕೇಳಿ ತಿಳಿದುಕೊಂಡರು )

ಆ ಮಹಾನ್ ಮನುಷ್ಯನ ಹುಟ್ಟಿದ ನಾಡಲ್ಲಿ ಹುಟ್ಟಿರೋದು ನನ್ನ ಪುಣ್ಯ!  ಮಹನೀಯರೇ, ಎಲ್ಲಿದ್ದೀರೋ ಏನೋ, ನಿಮ್ಮ ದೇಹ ಅಲ್ಪಾಯುವಾದರು, ನಿಮ್ಮ ನೆನಪು, ಸಾಧನೆ ಚಿರಾಯು!



Wednesday 28 September, 2011

ಖರೀದಿ


 ಗಂಡ ಹೆಂಡರು ಹೊರಟರು ಖರೀದಿಗೆ,

ಬೇಕೆಂದಿದ್ದಳು ಅವಳು ಬಟ್ಟೆಬರೆ.

ಖರೀದಿಯ ನಂತರ ಹೆಂಡತಿಗೆ ಬಟ್ಟೆ,
ಗಂಡನಿಗೆ ಬಿಲ್ಲಿನ ಬರೆ!!

Monday 5 September, 2011

ಒಂದು ಕ್ಷಣದ ನಿರ್ಲಕ್ಷ್ಯ, ನಷ್ಟವಾಗುವುದು ಲಕ್ಷ

ನನ್ನ 'ಲ್ಯಾಪ್ಟಾಪ್' ನ  ಕರುಳ ಬಳ್ಳಿಯ (cord) ಮೈ ಸುಕ್ಕಾಗತೊಡಗಿತು. ಪದೇ ಪದೇ ಮೈ ಬಿಸಿಯಾಗುತ್ತಿತ್ತು , ಆಗ 'ಇಂದು ನೀನೇನು ಕೆಲಸ ಮಾಡಬೇಡ' ಎಂದು ಮಲಗಿಸಿಬಿಡುತಿದ್ದೆ. ಸೂಕ್ಷ್ಮವಾಗಿ ಹೇಳುತ್ತಿತ್ತು.. 'ನಾನು ಸಾಕಷ್ಟು ಸವೆದಿದ್ದೀನಿ,   ಬೇರೆ ಯಾರನ್ನಾದರೂ ನೋಡಿಕೋ ಎಂದು ನಿಟ್ಟುಸಿರು ಬಿಡುತ್ತಲೇ ಇತ್ತು.. ' 

'ಈಗ ನಿನ್ನ ಪುರಾಣ ಕೇಳುವುದಕ್ಕೆಲ್ಲ ಸಮಯವಿಲ್ಲ, ನನಗೆ ಕಚೇರಿಗೆ ತಡವಾದಾಗ್ಲೆ ನಿನ್ನ ಗೋಳು ಶುರು ಮಾಡುತ್ತೀಯ' ಎಂದು ರೇಗಿದೆ. ನೀನು ಮನೆಗೆ ಬಂದ ಮೇಲೆ ನನ್ನ ಮಾತು ಕೇಳೋಲ್ಲ, ಸುಮ್ನೆ ನನ್ನ ಎಳೆದಾಡಿ, ನನಗೆ ಶಾಕ್ ಕೊಡಿಸುತ್ತೀಯ, ನಿನ್ನ ಲ್ಯಾಪ್ ಟಾಪ್ ನ ಚೇತನ ಜೀವಂತ ಇರಿಸಲು, ಆಮೇಲೆ ಕೇಳೋದೇ ಬೇಡ, ನಿನ್ನ ಬ್ಲಾಗ್, ನಿನ್ನ ಫೇಸ್ ಬುಕ್ , ನಿನ್ನ ಜೀಮೇಲ್, ನನ್ನ ಒದ್ದಾಟ ಕಾಣುವುದೇ ಇಲ್ಲ' ಎಂದು cord ಹೇಳಿಯೂ ಮುಗಿಸಿರಲಿಲ್ಲ.. ನಾನು ಕೋಣೆ ಇಂದ ಹೊರಗೆ ನಡೆದೇ.


ಮನೆಗೆ ಬರುವುದು ೬.೩೦ ಆಗಿತ್ತು. ಅಮ್ಮ ಚಕ್ಕುಲಿ ಮತ್ತೆ ಕಾಫಿ ಕೊಟ್ಟರು, ಚಕ್ಕುಲಿ ಕಟ-ಕಟನೇ ಕಡಿಯುತ್ತಾ, ಲ್ಯಾಪ್ ಟಾಪ್ 'on ' ಮಾಡಿದೆ. 'ON ' ಆಗಲೇ ಇಲ್ಲ! ಇದೇನಪ್ಪ ಆಯಿತು ಎಂದು, 'cord ಅನ್ನು power -socket ಬಾಯಿಗೆ ಇಟ್ಟೆ.. ಅದು ಉಸಿರು ತುಂಬಿ ಜೀವ ಕೊಡುತ್ತದೆ ಎಂದು. ಊಹ್ಞೂ.. ಎನೂ ಆಗಲಿಲ್ಲ.. ಗಾಬರಿಯಾಯಿತು.. ನನ್ನ ಫೋನ್ charger ಹಾಕಿ ಫೋನ್ ಸಿಕ್ಕಿಸಿದೆ, charge ಆಗುತಿತ್ತು.. ಅಂದರೆ ನನ್ನ ಪ್ರೀತಿಯ cord ನ ಉಸಿರು ನಿಂತು ಹೋಯಿತೇ? ಆಗ ಒಳಗಿನ ಮನಸ್ಸು ಕುಪಿತಗೊಂಡಿತು.. ' ಸಾಕು ನಾಟಕ ನಿಂದು, 'ಪ್ರೀತಿಯ' ಅಂತೆ! ನಿನ್ನ ಲ್ಯಾಪ್ ಟಾಪ್ ನೋಡೋಕ್ಕೆ ಆಗೋಲ್ಲ ಎಂದು ನಿನಗೆ ಬೇಸರವಾಗಿದಿಯೇ ಹೊರತು cord ಹೋಯಿತು ಎಂದು ಅಲ್ಲ.
Cord ಜೊತೆ ನಿನ್ನ ಲ್ಯಾಪ್ ಟಾಪ್ ಕೂಡ ಸತ್ತ ಹಾಗೆಯೇ. ' ನಾನು ಮೌನದಿಂದ ತಲೆ ಬಾಗಿದೆ.

ನನ್ನ ಎಷ್ಟೋ file ಗಳು, ಎಷ್ಟೋ ವರ್ಷದ documents ಗಳು, ಚಿತ್ರಗಳು ಎಲ್ಲ ಆ ಬೃಹದಾಕಾರದ ಲ್ಯಾಪ್ ಟಾಪ್ ದೇಹದಲ್ಲಿ ಹೂತುಹೋಗಿತ್ತು. ಈಗ ಅದನ್ನು ಹೇಗಾದರು ಮಾಡಿ ಮರಣೋತ್ತರ ಪರೀಕ್ಷೆ ಮಾಡಿಸಿ ಆದರೂ  ಹೊರ ತೆಗಿಸಬೇಕಿತ್ತು. ನಿಧಿ ಯಾರದೋ ದೇಹದಲ್ಲಿ ಬಚ್ಚಿಟ್ಟು ಅವರು ಸತ್ತ ಹಾಗೆ ಆಯಿತು ನನ್ನ ಪರಿಸ್ಥಿತಿ. ಗೊತ್ತಿರುವವರನ್ನ ಕೇಳಿದೆ. 
ನನ್ನ ಹಳೆಯ Cord ಈಗ ಮಾರುಕಟ್ಟೆಯಲ್ಲೇ ಇಲ್ಲವಂತೆ. ಬೇರೆಯಾವುದು ಇದಕ್ಕೆ ಸರಿ ಹೊಂದುವುದಿಲ್ಲವಂತೆ.. 



ಸರಿ.. ಯಾವುದೋ ಚೀನೀ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂದು, ಒಂದು ಭಾನುವಾರವೆಲ್ಲ ಮಳೆ, ಚಳಿ, ಗಾಳಿಯಲ್ಲಿ ಅಲೆದು, ಒಂದು Cord ತಂದೆ. ಅದರಿಂದ ಜೀವ ಏನೋ ಬಂತು, ಆದರೆ ಅದು ಮೊದಲ ಭಾರಿಯೇ ಜ್ವರದಿಂದ ಬಳಳಲು ಶುರು ಮಾಡಿತ್ತು.. ಈ ಭಾರಿ ಹುಷಾರಗಿದ್ದೆ. ನನ್ನ data ಎಲ್ಲ Hard-disk drive ಗೆ ರವಾನಿಸಬಿಟ್ಟೆ. ಮುಂದಿನ ದಿನ  ಅದೂ  ಅಸುನೀಗಿತ್ತು.

ಒಂದು ಪಾಠವಂತೂ ಕಲೆತೆ. 'ಒಂದು ಕ್ಷಣದ ನಿರ್ಲಕ್ಷ್ಯ, ನಷ್ಟವಾಗುವುದು ಲಕ್ಷ' 
  

Tuesday 30 August, 2011

ಪಂಡಿತರ ಉವಾಚ - ೧


ಖನ್ನಡ ಮಾತೆ ಹೃದಯ ಅಂತು ಒಡೆದು ವೋಯಿತು



Wednesday 17 August, 2011

ನಿನ್ನ ಮೂಗು ಎಲ್ಲಿ?

ಮೂಗು ತೋರಿಸು ಅಂದ್ರೆ ಹೇಗೆ ತೋರಿಸುತ್ತಿತ್ತು ಎಂದು ನೋಡಿ..

ಈ ವೀಡಿಯೊ ತೆಗೆದಾಗ ಬುನ್ನಿಗೆ ಹನ್ನೊಂದು ತಿಂಗಳು. ಮೂಗನ್ನ ಒಂಬತ್ತನೇ ತಿಂಗಳಿನಿಂದ ತೋರಿಸುತಿತ್ತು.. ಆದರೆ ವೀಡಿಯೊ ತೆಗೆಯಲು ಹೋದರೆ ಮಾತ್ರ ಹೇಳಿದ ಹಾಗೆ ಮಾಡುತ್ತಿರಲಿಲ್ಲ.. ನಮ್ಮ ವೀಡಿಯೊ ತೆಗೆಯುವ ಪ್ರಯತ್ನ ಸಫಲವಾಗಿದ್ದು ಹನ್ನೊಂದನೇ ತಿಂಗಳಲ್ಲೇ. 




.
ಈಗ ಮೂಗು ತೋರಿಸು ಅಂದ್ರೆ ಅವಳ ಬೆರಳಲ್ಲಿ ತೋರಿಸುತ್ತೆ..
 ಸಮಯ ಹಾರಿ ಹೋಗುತ್ತಿದೆ.. ಎಷ್ಟು ಬೇಗ ದೊಡ್ಡವಳಾಗುತ್ತಿದ್ದಾಳೆ .. ನಂಬಲು ಆಗುತ್ತಿಲ್ಲ..  

ತೊದಲು ಮಾತು

ಮಕ್ಕಳ ಮೊದಲ ಮಾತು ತೊದಲು.. ಅದನ್ನ  ಕೇಳಲು  ಬಹಳನೇ ಅಂದ..  
ಬುನ್ನಿ ಮೊದಲ ಭಾರಿ ಅಪ್ಪ ಅಮ್ಮ ಅಂತ ಶಬ್ದ ಪ್ರಯೋಗ ಮಾಡಿದ್ದು ೧೦ ನೇ ತಿಂಗಳಲ್ಲಿ.. 
ಆದರೆ ಅವಾಗ ಆ ಪದಗಳ ಅರ್ಥ ಅವಳಿಗೆ ತಿಳಿದಿರಲಿಲ್ಲ.. 
೧೧ ನೇ ತಿಂಗಳಲ್ಲಿ ಅರ್ಥ ತಿಳಿದು ಶಬ್ಧಗಳ ಪ್ರಯೋಗ ಮಾಡಲು ಶುರು ಮಾಡಿದಳು.. ಆವಾಗಿನಿಂದ ಪ್ರತಿ ನಿತ್ಯ ಏನೋ ಹೊಸದು ಕಲಿಯೋತ್ತೆ ಗುಂಡಮ್ಮ..  
ಸದ್ಯಕ್ಕೆ ನಿತ್ಯ ಬಳಸುವ ಪದಗಳ (ಬಾಣ) ಪ್ರಯೋಗದ ಪಟ್ಟಿ ಮಾಡುತ್ತೇನೆ.. 
 ಎಡ ಭಾಗಕ್ಕೆ ಬಾರೋ ಪದಗಳು ಅವಳ ಪ್ರಯೋಗ - ಬಲಕ್ಕೆ ನಮ್ಮ ಭಾಷೆಯಲ್ಲಿ ಅದರ ಅರ್ಥ

 ನಿತ್ಯ ಬಳಕೆ ವಸ್ತುಗಳ ವಾಸ್ತು


ಬೋತುತುತು - REMOTE 
ಬಾತೆತೆ - ಬಾಚಣಿಗೆ
ಮೋಮ್ - ಫೋನ್
ಬುಗಿ - ಬುಗುರಿ
ಕೂ - ಶೂ
ತೋತ - ಲೋಟ
ಪೂನ್ - Spoon
 ತುತ್ತು - ಜುಟ್ಟು (ಜುಟ್ಟನು ಹಾಕುವ Band )
ಬದೆ - ಬಲೆ
ಓಯೇ - ಓಲೆ
ಬತೆತ್ - Bucket 
ಕಾಕು - ಕಾಸು/ಕಾಳು
 ಮನೆ - ಮಳೆ

 ಮೈಗೂ ಸೈ

ಒತ್ತೆ - ಹೊಟ್ಟೆ
ಮೂಗು - ಮೂಗು
ಕಣ್ಣು - ಕಣ್ಣು
ಕಿವಿ - ಕಿವಿ
ತಯೇ - ತಲೆ 
ಕಾಆ - ಕಾಲು
ಕೈ - ಕೈ

ಆಹಾರದ ವ್ಯವಹಾರ 

ದೋತೆ - ದೋಸೆ
ಬಿತ್ತಿ - ಬಿಚ್ಚಿ (Biscuit)
ಕಾಕೇಕ್ - ಚಾಕಲೇಟ್
 ಗೀಯ - ಜೀಯ (ನೀರು ಮಕ್ಕಳಿಗೆ ಬಳಸುವ ಪದ)
ಯಾಯಾ - ಲಾಲ (ಹಾಲು ಮಕ್ಕಳಿಗೆ ಬಳಸುವ ಪದ )
ತತಾಪಿ - ಚಪಾತಿ

 ಪರಿ 'ಸ್ತಿತಿ'

ಆತೆ - ಆಚೆ
ಮೇಏ- ಮೇಲೆ
ಕೇಗೆ - ಕೆಳಗೆ

 ಕ್ರಿಯೆ ಪದದ ಮಾಯೆ

ಕೂತಿ - ಕೂಚಿ (ಕೂರು ಎನ್ನಲು ಮಕ್ಕಳು ಬಳಸುವ ಪದ )
ನಿಂಕೊ - ನಿಂಚೋ (ನಿಲ್ಲು ಎನ್ನಲು ಮಕ್ಕಳು ಬಳಸುವ ಪದ)
ಮೊಂಮೊಂ -  ಮೊಂಮೊಂ (ಊಟ)
 ಕೊವು - ಕೊಡು
ಎತ್ತೋ - ಎತ್ತಿಗೋ
 ಗೋಗೋ ತಾಕಿ - ಜೋ ಜೋ ಲಾಲಿ (ಹಾಡು ಎಂದು ಹೇಳಲು)
ತಾಕಿ - ತಾಚಿ (ಮಲಗು ಎನ್ನಲು ಮಕ್ಕಳಿಗೆ ಉಪಯೋಗಿಸುವ ಪದ)
ತಿನ್ನು - ತಿನ್ನು (ತಿನ್ನಲು ಬೇಕು ಎಂದು ಕೇಳುವ ಪರಿ )
ಗೀ ಗೀ - ಜುಯ್ಯ್ ಜುಯ್ಯ್ (ಜೋಕಾಲಿ ಆಡಿಸು ಎಂದು ಕೇಳಲು ಇದನ್ನು ಹೇಳುತ್ತಾಳೆ)
ಹಾಕು - ಹಾಕು


ಹಣ್ಣು-ತರಕಾರಿ ಬೇಕಾ ರೀ?  

ತುತೀನ - ಪುದೀನಾ
ಆಊ - ಆಲೂ  
ಪೋತತೋ - Potato 
ಕಾತೇತ್ - Carrot 
ಮಾವು - ಮಾವು
ಮೆಮಿಂಕಾಯ್ - ಮೆಣಸಿನಕಾಯಿ

 ಹಾಗೆ ಕೆಲವು

ಹಣ್ಣುಕಾಯ್ - ಯಾವುದೇ ಅವಳಿಗೆ ಗೊತ್ತಿರದ ಹಣ್ಣು ತರಕಾರಿ
ನೀನು - ನಾನು (ನಾವು ಅವಳನ್ನು ನೀನು ಎಂದು ಮಾತದಿಸುವುದರಿಂದ ಅವಳು ನೀನು ಎಂದರೆ ನಾನು ಅಂದ್ಕೊಂಡಿದ್ದಾಳೆ)

ಇದು ಬಿಟ್ಟು ಪ್ರಾಣಿ ಪಕ್ಷಿಗಳನ್ನ ಗುರುತಿಸುತ್ತದೆ.. ಅದರ ಕೂಗಿನ ಶಬ್ಧವನ್ನು ಮಾಡುತ್ತದೆ.. ಅದನ್ನು ವೀಡಿಯೊ ಸಮೇತ ಹಾಕುತ್ತೇನೆ..  

Friday 29 July, 2011

ಸಾಗುತ ದೂರ ದೂರ

 ಅವಳು ದೂರದ ಊರಿಗೆ ಕೆಲಸಕ್ಕಾಗಿ ಹೊರಟು ನಿಂತಿದ್ದಳು. ಅವಳ ತಂದೆ ಅವಳನ್ನು ಬಿಟ್ಟು ಬರಲು ಜೊತೆ ಇದ್ದರು. ರೈಲು ನಿಲ್ದಾಣದಲ್ಲಿ, ಅವನಿಗೆ ಕರೆ ಮಾಡಿದಳು. ಅವನಿಲ್ಲಿ ಅವಳು ಹೊರಡುತ್ತಾಳೆ ಎನ್ನುವ ಯಾವ ಅಂಜಿಕೆ, ಯೋಚನೆ, ಪೇಚಾಟ ಏನೂ ಕಾಣಲಿಲ್ಲ. 'ಹೊರಡುತ್ತಿದ್ದೀನಿ ನಾನು. ಕೊನೆಯದಾಗಿ ಇಷ್ಟು ಹೊತ್ತು ಮಾತನಾಡಲು ಆಗೋದು. ಇನ್ನು ಮುಂದೆ ಅಷ್ಟೊಂದೆಲ್ಲ ಖರ್ಚು ಮಾಡಿಕೊಂಡು ಕರೆ ಮಾಡೋಕ್ಕಾಗೋಲ್ಲ." ಎಂದಳು. ಅವಳ ಕಣ್ಣು ತುಂಬಿ ಬಂದಿತ್ತು. ಹೃದಯ ೧೦ ಕಿಲೋ ಅಕ್ಕಿ ಇರೋ ಮೂಟೆ ಆಗಿತ್ತು. 
'ಗೊತ್ತಿರೋ ವಿಷ್ಯ ಅಲ್ವಾ? ಜೀವನ ಬಂದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು' ಎಂದು ನಿರ್ಭಾವವಾಗಿ ಹೇಳಿದನು. 

ಅವಳಿಗೆ ಅವಳ ಮನಸಿನ ಹಂಬಲ ಗೋಚರಿಸೋ ತೊಡಗಿತ್ತು.. . ಅವನಿಂದ ದೂರ ಹೋಗುತಿದ್ದೀನಿ ಎಂದು ಯೋಚಿಸಿದಾಗೆಲ್ಲ ಹೃದಯ 'ನಾ ನಿನ್ನ ಜೊತೆ ಬರಲಾರೆ' ಎಂದು ಕೀರಲು ಧ್ವನಿಯಲ್ಲಿ ಅಳುತ್ತಿತ್ತು. ಅವಳ ಹೃದಯಕ್ಕೆ ಅವನ ಒಡನಾಟ ಬೇಕಿತ್ತು. ಆದರೆ ಅವನಿಗೆ ಏನೂ ಅನ್ನಿಸೋದೇ ಇಲ್ವಲ್ಲ. ಅವಳ mobile ತೆಗೆದು ಬರೆದಳು

ಬಾಗಿಲು ತೆರೆದಿದೆ, ಕಂಗಳು ಕಾದಿವೆ
ಬರಬೇಕಾದವರು ಬರುವರೇನೋ?
ಮನದ ಕಾವು ತಣಿವುದೇನೋ?
ಅವನ ನೆನಪಲ್ಲೇ ಸವೆದಿದೆ ಜೀವ
ಆ ಸವಿಯಲ್ಲಿ ಮರೆತಿದೆ ನೋವ..
ಒಲವಿನ ಧಾರೆಯು ಬಸಿದು ಹರಿಯುತಿದೆ
ಗುಪ್ತಗಾಮಿನಿಯಾಗಿ ನೆನೆಸಿ, ಮರೆಯಾಗಿದೆ.
ಇದು ಆ ಹೃದಯಕ್ಕೆ ತಿಳಿಯದೆ ಹೋದರೆ?
ಮುನದಲೇ ಚೀರುತಿದೆ ಹೃದಯಾಂತರಾಳದ ಕರೆ

ಬರೆದು ಮುಗಿಸಿದ್ದಳಷ್ಟೇ.. ಅವನ ಕರೆ ಬಂತು.

'ಯಾವ platform ನಲ್ಲಿ ಇದ್ದೀಯ?'
'ಯಾಕೆ? ಇಲ್ಲಿಗೆ ಬಂದಿರೋ ಹಾಗಿದೆ!! ಹೌದಾ?'
'ಕೇಳಿದಕ್ಕೆ ಉತ್ತರಿಸು'
'೫'
'ಸೀದಾ ಬಾ.. Gate ಹತ್ತಿರ'

ಅವಳ ಕಿವಿಯನ್ನ ಅವಳೇ ನಂಬಲಾಗಲಿಲ್ಲ.. ಅವನು ಬಂದಿದ್ದ!! ಅವಳನ್ನ ಬೀಳ್ಕೊಡಲು. ಅವಳ ಅಪ್ಪನಿಗೆ ಇಲ್ಲೇ ನನ್ನ ಗೆಳೆಯರು ಬಂದಿದ್ದಾರೆ, ಹೋಗಿ ಬರುತ್ತೇನೆಂದು ಹೇಳಿ ಓಡಿದಳು.. ಯಾವುದೊ ದೊಡ್ಡ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಅವಳ ಹೆಸರು ಕರೆದಾಗ ಆಗೋ ಅನುಭವ ಅವಳಿಗೆ.. ಅವಳ ಪಾಲಿಗೆ ಅವನೇ 'ಜೀವನ' 

ಅವನು ಅವಳನ್ನು ಕಂಡೊಡನೆ ನಕ್ಕ.. ಇವಳಿಗೆ ಹಿಗ್ಗೋ ಹಿಗ್ಗು.. 'ಹುಷಾರಾಗಿ ಹೋಗಿ ಬಾ' ಎಂದ.. ಸರಿ ಎಂದು ತಲೆ ಅಲ್ಲಾಡಿಸಿದಳು.. ಮಾತೇ ಹೊರಡಲಿಲ್ಲ.. !  

Wednesday 20 July, 2011

ಪುರಾಣ



ಸೀತೆಯನು ಮೆಚ್ಚಿಸಲು ಬಂದ ರಾವಣ,
ತೋರಿಸಿದ ಅವನ ಎಲ್ಲ ಪರಾಕ್ರಮ..
ಜಾನಕಿಯ ಮನದ ತುಂಬಾ ಅವಳ ರಮಣ
ರಾವಣ ಎಂದಿಗೂ ಪರ, ಅಕ್ರಮ

Monday 18 July, 2011

ವಿರಹದ ಬೇಗೆ

 ವಾರ  ದಿನ ಕಳೆದಿತ್ತು.. ಅವಳು ಅವನಿಗೆ sms ರವಾನಿಸೇ ಇರಲಿಲ್ಲ.. ಯಾಕೆ ಹೀಗೆ ಮಾಡಿದೆ ಅವಳು?  

ಏನಾಗಿತ್ತು  ವಾರ  ದಿನದ ಹಿಂದೆ?
ಯಾರೋ ಪುಟಗೋಸಿ "good-friend" ಅಂತ ಹೇಳಿಕೊಳ್ಳುವವನು ಅವಳ ಬಾಳ ಹಾದಿಯಲ್ಲಿ ವಕ್ಕರಿಸಿದ್ದ.. ಆ ಆಸಾಮಿಯೋ ಸಿಕ್ಕಾಪಟ್ಟೆ possessive ಆಗಿದ್ದ ಅವಳ ಬಗ್ಗೆ .. ಅವಳ ಗೆಳೆತನ ಅರಸಿ ಬಂದವರಿಗೆ ಸದಾ ತೆರೆದಿದ್ದ ಅವಳ ಹೃದಯ,  ಹೊಸ ಗೆಳೆತನ ಬೇಡ ಎನಿಸಲಿಲ್ಲ.. ಆದರೆಈ ಗೆಳೆತನ ಅವಳಿಗೆ 'ಎಳೆತಅನ್ನಿಸೋಕ್ಕೆ ಶುರು ಆಗಿತ್ತು..  ಸ್ವಚ್ಚಂದ ಹಕ್ಕಿಯಾಗಿ ಹಾರುತ್ತಿದ್ದ ಮನಸ್ಸನ್ನು ಯಾರೋ ಬಲವಂತವಾಗಿ ಹಿಡಿದು ತನ್ನ ಜೊತೆಯಲ್ಲೇ ಇರಬೇಕು ಎನ್ನುವ ಸ್ವಾರ್ಥದಲ್ಲಿ ಪಂಜರದೊಳಗೆ ಹಾಕಿದ ಹಾಗೆ ಇತ್ತು..   ಪುಟಗೋಸಿ good -friend  "ಬೇರೆ ಯಾವ ಹುಡಗನ ಜೊತೆ ಮಾತಾಡಿದರೆ ನನ್ನ ತಾಯಿ ಮೇಲೆ ಆಣೆ" ಅಂದಿದ್ದ.. ಅವಳಿಗೆ ಅವನದೇ ಧ್ಯಾನ, ಸಂಧಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದಳು..  "ಛೆ..  ಮುನುಷ್ಯ ತಾಯಿಯ ಮೇಲೆ ಯಾಕೆ ಆಣೆ ಹಾಕಿದತನ್ನ  ಮೇಲೆ ಹಾಕಿಕೊಂಡಿದ್ದರೆಸಾಯೋ ಮಗನೆ.. ಯಾವ ಆಣೆನೋ ನಾ ಕಾಣೆ ಅನ್ನಬಹುದಿತ್ತು.. " ಎಂದು ಕೈ-ಕೈ ಹಿಸುಕಿಕೊಂಡಳು..  ಅವಳಿಗೆ ಯಾರನ್ನು hurt ಮಾಡೋದು ಇಷ್ಟ ಇರಲಿಲ್ಲ.. ಹಾಗಂತ ಅವಳಿಗೆ ಜೀವದ ಗೆಳೆಯನ ವಿರಹವೂ ತಡ್ಕೋಳೋದು ಕಷ್ಟವಾಗಿತ್ತು..  "ಅವನಿಗೆ ನಾನು hurt ಮಾಡಿರಬಹುದಲ್ವಾ?" ಎಂದು ಪೇಚಾಡುತ್ತಿದ್ದಳು..

ಈಗ
ಅವಳ ಅಮ್ಮ ಹಾಲು ತಂದು ಕೊಟ್ಟರು.. "ಸ್ವಲ್ಪ ಹೊತ್ತು ವಿರಾಮ ತೊಗೋಳೇ, ಆಮೇಲೆ ಮತ್ತೆ ಓದಲು ಕೂರು" ಎಂದು ಹೇಳಿ ಕೆಳಗೆ ಹೋದರು.. ಅವಳು ಬಾಲ್ಕನಿಯಲ್ಲಿ ನಿಂತು ಬಾನ ಕಡೆ ನೋಡಿದಳು.. ಅದರ ಮುಖವು ಕೋಪದಿಂದ ಕೆನ್ನೆ ಊದಿ, ಕಪ್ಪಿಟ್ಟಿದ್ದವು.. ಅವಳಿಗೆ ಅಪರಾಧಿ ಪ್ರಜ್ಞೆ ಕಾಡ ತೊಡಗಿತು.. "ಅವನು ಏನು ಮಾಡಿದ ಎಂದು ಅವನನ್ನು ದೂರ ಮಾಡಿದೆಅವನಾದರೋ ಏನು ಕೇಳಲಿಲ್ಲ.. ಏನೂ ಹೇಳಲಿಲ್ಲ.. ಸುಮ್ಮನೆ ದೂರ ಸರಿದ.. ಅವನ ಬದುಕಿನಲ್ಲಿ ನನ್ನ ಮೌಲ್ಯ ಇಲ್ಲವಾನನಗೂ ಈಗ ಮುಖವೇ ಇಲ್ಲ ಅವನಿಗೆ ಸಂದೇಶ ಕಳಿಸಲು.. ಅವನು ನನಗೆ ಅವಮಾನ ಮಾಡಿದರೆ? ನೀನು ಯಾರು ಎಂದು ಕೇಳಿದರೆ? " ಕಣ್ಣಲ್ಲಿ ನೀರು ತುಂಬಿತ್ತು.. ಮಣ್ಣಲ್ಲಿ ಮಳೆ ನೀರು ಇಂಗಿತ್ತು.. ಇವಳ ಬಟ್ಟೆಯ ಜೊತೆ ಮನಸು ಭಾರವಾಗಿತ್ತು..

ಬಟ್ಟೆ ಬದಲಿಸಿ, ಮನ ಗಟ್ಟಿ ಮಾಡಿ ಪುಸ್ತಕದ ಮುಂದೆ ಕೂತಳು.. ಸುಮಾರು ಪುಟ ಮುಗಿಸಿದ್ದಳು.. ಎಂದೂ ಓದಿನ ಮಧ್ಯೆ mobile ಮುಟ್ಟದ ಅವಳಿಗೆ, ಒಮ್ಮೆ ನೋಡಿಬಿಡೋ ಚಪಲವಾಯಿತು.. 1 messages received ಎಂದು ಬಂದಿತ್ತು.. "Show " ಒತ್ತಿದೊಡನೆ,
  ಅವಳ ಗುಂಡಿಗೆಯ ಗುಂಡಿ ಎಲ್ಲ ಕಿತ್ತು ಬರುವ ಹಾಗೆ ಬಡ್ಕೋತಿತ್ತು..  ಅವನ ಸಂದೇಶ! ಅದನ್ನು ತೆಗೆಯಲು ಭಯ.. ಕೈ ನಡುಗುತಿತ್ತುಹಣೆಯ ಮುತ್ತುಗಳು ಮೂಡಿದ್ದವು.. ಧೈರ್ಯ ಮಾಡಿ open ಮಾಡೇ ಬಿಟ್ಟಳು..
ಮತ್ತೆ ಮತ್ತೆ ಓದಿದಳು.. 
Saalon baad  naa jaane kya sama hoga......
Hum mein se na jaane kaun kaha hoga......
Phir aise milenge khwabon mein.....
Jaise sukhe gulab milte hai kitaboon mein..

"ಏನ್ ಏನೋ ಅರ್ಥವಾಗುತ್ತಿದೆ.. ಅಥವಾ ಏನ್ಏನೋ ಕಾಣುತ್ತಿದೆಯಅವನೆನಾ ಕಳಿಸಿರೋದು? Back ಒತ್ತಿ ನೋಡಿದಳು.. ಹೌದು.. ಅವನೇ!  ಏನಿದರ ಅರ್ಥ? ಏನೆ ಆಗಲಿ! ನಾನು Reply ಮಾಡೇ ಮಾಡ್ತೀನಿ.. ಆದರೆ..  ಪುಟಗೋಸಿ friend ತಾಯಿಯ ಮೇಲೆ ಆಣೆ?  ಏನು ಮಾಡಲಿ? ತಡವಾಗಿ ಉತ್ತರಿಸಿದರೆ ನಾನು ಅವನನ್ನು ನಿರ್ಲಕ್ಷ್ಯ ಮಾಡುತಿದ್ದೀನಿ ಅಂದು ಕೊಂಡರೆ? ಉತ್ತರ ಆಮೇಲೆ ಹುಡುಕೋಣ" ಇಷ್ಟೆಲ್ಲಾ ಕ್ಷಣಾರ್ಧದಲ್ಲಿ ಯೋಚಿಸಿದ್ದಳು.. Reply ಒತ್ತೆ ಬಿಟ್ಟಳು..
ಏನು ನಮ್ಮನ್ನು ನೆನಪಿಸಿಕೊಂಡುಬಿಟ್ಟಿದ್ದೀರ? ಹೇಗೆ ಇದೆ ಜೀವನ?

Send ಗುಂಡಿ 'ಟಕ್' ಎಂದು ಒತ್ತಿದಾಗ ಸಂದೇಶದ ಜೊತೆ ಮನದ ಭಾರವೂ ಹಾರಿ ಹೋಯಿತು.. ಮುಖದಲ್ಲಿ ನಗು ಮೂಡಿತ್ತು.. "ಬೈಯ್ಯುತ್ತಾನಾ? ಬೈಯ್ಯಲಿ.. ನಾನು ಮಾಡಿರೋ ಕೆಲಸವೂ ಅಂತದ್ದೇ.. ಸದ್ಯ ಪುಣ್ಯಾತ್ಮ Sms ಅನ್ನೋ ಕೊಂಡಿಯನ್ನು ನನ್ನ ಗುಂಡಿಗೆಗೆ ಹಾಕಿದನಲ್ಲ.. ಇನ್ನ ನಾನು ಹೇಗಾದರೂ ಈ ಪುಟಗೋಸಿ friend ಇಂದ ಪಾರಾಗಬಹುದು.." ಎಂದು ಯೋಚಿಸುವುದರಲ್ಲಿ ಮತ್ತೆ sms ಬಂದಿತ್ತು..

ಮರೆತವನು ನಾನಲ್ಲ 

ನೇರ, ದಿಟ್ಟ ಉತ್ತರ ಬಂತು.. "ಇದಕ್ಕೇನೆ ಇಷ್ಟ ಆಗೋದು ನೀನು" ಯೋಚಿಸುವುದರಲ್ಲಿ ನಗೆ,ಹನಿ ಎರಡೂ ಮೂಡಿತ್ತು.. Topic ಬದಲಾಯಿಸಿದಳು..  ಸ್ವಲ್ಪ ಹೊತ್ತು ಕರ್ಣ-ಅರ್ಜುನರ ಬಾಣಗಳ ತರಹ ಪುಂಖಾನುಪುಂಖವಾಗಿ sms ಓಡಾಡಿತು.. 

ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವಾರ್ಷ ಆಯಸ್ಸಂತೆ (ನಮ್ಮ ಸಂಬಂಧಕ್ಕೆ!) ಅಂದುಕೊಂಡಳು.. !

ಆ ಆಣೆಯ ಕಥೆ ಏನಾಯಿತು
ಆ ಪುಟಗೋಸಿ good -friend  ಏನು ಹೇಳಿದಿದ್ದು? "Do not  talk to  any other guy" ಅಂತ ತಾನೇ
ಅವಳು ಮನದಲ್ಲಿ "Get a life bugger! I am talking to my MAN"  ಎಂದು ಗೆಲುವಿನ ನಗೆ ನಕ್ಕಳು.. 

Sunday 10 July, 2011

ರವ ರವ ರವಿವಾರ!


ಭಾನುವಾರವೂ ಮನೆಯ ಸೂರಿಲ್ಲ ಎನಗೆ,
ಇದೆಯಂತೆ ಒಂದು ಸಮಾರಂಭ..
ಹೋಗಬೇಕು ಭಾಮೆಯ ಮಾಮನ ಮನೆಗೆ,
ಇಲ್ಲದಿದ್ದರೆ ಮನೆಯಲ್ಲಿ ಸಮರ ಆರಂಭ..